ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೨)

20 Aug 2008

ಭಾಗ-೨

(ಈ ಲೇಖನ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಎಂಬ ಲೇಖನಕ್ಕೆ ನೀಡಿದ ಪ್ರತಿಕ್ರಿಯಾ ಲೇಖನದ ಎರಡನೇ ಭಾಗ. ಮೂಲ ಲೇಖನವನ್ನು http://sampada.net/article/10890 ದಲ್ಲಿ ನೋಡಬಹುದು. ನನ್ನ ಲೇಖನದ ಮೊದಲ ಭಾಗವನ್ನು http://sampada.net/article/10916 ನಲ್ಲಿ ನೋಡಬಹುದು)

ಅಮರನಾಥ ವಿವಾದದ ಬಗ್ಗೆ ಪ್ರಸ್ತಾಪಿಸುತ್ತ ನಾಗಭೂಷಣ ಅವರು ಹೀಗೆ ಬರೆಯುತ್ತಾರೆ: ಅಮರನಾಥದ ಗುಹಾಂತರ್ಗತ ಹಿಮಲಿಂಗವನ್ನು ಮೊದಲು ನೋಡಿ ಜಗತ್ತಿಗೆ ಪರಿಚಯಿಸಿದವ ಒಬ್ಬ ಮುಸ್ಲಿಂ ದನಗಾಹಿ. ನಂತರ, ಅಮರನಾಥ ಯಾತ್ರೆ ಪ್ರಾರಂಭವಾದಾಗ, ಯಾತ್ರಿಕರ ಕಷ್ಟಸುಖ ನೋಡಿಕೊಂಡಿದ್ದೂ ಮುಸ್ಲಿಮರೇ. ಹದಿನೈದು ವರ್ಷಗಳ ಹಿಂದೆ ನೈಸರ್ಗಿಕ ಪ್ರಕೋಪಕ್ಕೆ ಯಾತ್ರಿಗಳು ಸಿಲುಕಿದಾಗ ಅವರ ನೆರವಿಗೆ ಧಾವಿಸಿದ್ದೂ ಸ್ಥಳೀಯ ಮುಸ್ಲಿಮರೇ. ಹಾಗೆ ನೋಡಿದರೆ, ಅಮರನಾಥ ಯಾತ್ರೆಯನ್ನು ನಿರ್ವಹಿಸುವುದು ಕಾಶ್ಮೀರಿ ಮುಸ್ಲಿಮರ ಒಂದು ವಾರ್ಷಿಕ ಸಂಪ್ರದಾಯವೇ ಆಗಿಹೋಗಿದೆ. ಆದರೆ, ನೈಸರ್ಗಿಕ ಪ್ರಕೋಪದ ನಂತರ, ಜಮ್ಮು ಕಾಶ್ಮೀರದ ಆಗಿನ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ, ಯಾತ್ರೆಯ ವ್ಯವಸ್ಥಿತ ನಿರ್ವಹಣೆಗಾಗಿ ಅಮರನಾಥ ದೇವಸ್ಥಾನ ಮಂಡಳಿ ರಚಿಸಿ, ಯಾತ್ರೆ ಕಾಲದ ತಾತ್ಕಾಲಿಕ ಬಳಕೆಗಾಗಿ ೪೦ ಹೆಕ್ಟೇರ್‌ ಅರಣ್ಯ ಭೂಮಿ ಒದಗಿಸಿತು...”

ಈ ಮಾಹಿತಿ ನೀಡುವಾಗ ನಾಗಭೂಷಣ ಅವರು ಸಮಚಿತ್ತರಾಗೇ ಇದ್ದಾರೆ. ನಂತರ ಅವರಲ್ಲಿ ಜಾತ್ಯತೀತ ಭೂತ ಆವರಿಸಿಕೊಂಡಿತೆಂದು ಕಾಣುತ್ತದೆ. ಏಕೆಂದರೆ, ಇದ್ದಕ್ಕಿದ್ದಂತೆ ಅವರ ಆಕ್ರೋಶ ಜಮ್ಮು ಕಾಶ್ಮೀರದ ಹಿಂದಿನ ರಾಜ್ಯಪಾಲ ಲೆಫ್ಟಿನೆಂಟ್‌ ಜನರಲ್‌ ಎಸ್‌.ಕೆ. ಸಿನ್ಹಾ ಮೇಲೆ ತಿರುಗುತ್ತದೆ. ಅದಕ್ಕೆ ಕಾರಣ, ಅಧಿಕಾರದ ಕೊನೆಯ ದಿನಗಳಲ್ಲಿ ಅವರು ದೇವಸ್ಥಾನ ಆಡಳಿತ ಮಂಡಳಿ ಪುನರ್‌ರಚಿಸಿ ರಾಜ್ಯಪಾಲರು ಹಿಂದು ಆಗಿದ್ದರೆ, ಮಂಡಳಿಯ ಅಧ್ಯಕ್ಷತೆಯನ್ನು ಅವರೇ ವಹಿಸಬಹುದೆಂದು ’ಕೋಮು ಅಂಶ’ವನ್ನು ಸೇರಿಸಿದರಂತೆ!

ಅಲ್ಲ ಡಿಎಸ್‌ಎನ್‌ ಅವರೇ, ಹಿಂದುಗಳಿಗೆ ಸಂಬಂಧಿಸಿದ ಮಂಡಳಿಗೆ ಹಿಂದು ವ್ಯಕ್ತಿಯೊಬ್ಬ ಅಧ್ಯಕ್ಷ ಆಗುವುದರಲ್ಲಿ ತಪ್ಪೇನಿದೆ? ಅಷ್ಟಕ್ಕೂ ಜಗತ್ತಿನ ಎಲ್ಲ ಕಡೆ ನಡೆಯುತ್ತಿರುವುದು ಇದೇ ಅಲ್ಲವೆ? ಹಜ್‌ ಯಾತ್ರಾ ಕಮಿಟಿಗೆ ಎಲ್‌.ಕೆ. ಆಡ್ವಾಣಿ ಅಧ್ಯಕ್ಷರಾಗಲು ಬರುತ್ತದೆಯೆ? ಒಂದು ವೇಳೆ ಹಾಗೆ ಬರುವುದಾದರೂ, ಅದಕ್ಕೆ ಮುಸ್ಲಿಮರು ಒಪ್ಪಿಕೊಂಡಾರೆ? ಸಂಬಂಧಗಳು ಸಹಜವಾಗಿರುವಾಗ ಇಂತಹ ನಿಯಮಗಳ ಅವಶ್ಯಕತೆ ಇರುವುದಿಲ್ಲ. ಆದರೆ, ಕಾಶ್ಮೀರ ವಿವಾದ, ಅಮರನಾಥ ಯಾತ್ರಾ ಮಂಡಳಿ ರಚನೆ ಹಾಗೂ ಪುನರ್‌ರಚನೆಗಿಂತ ಸಾಕಷ್ಟು ಮುಂಚಿನದು ಎಂಬುದು ತಮ್ಮ ಗಮನದಲ್ಲಿಲ್ಲವೆ? ಅಷ್ಟಕ್ಕೂ ಲೆ.ಜ. ಸಿನ್ಹಾ ಸೇರಿಸಿರುವ ಅಂಶ, ’ಒಂದು ವೇಳೆ ರಾಜ್ಯಪಾಲ ಹಿಂದು ಆಗಿದ್ದರೆ...’ ಎಂದು ಮಾತ್ರವೇ ಹೊರತು, ಎಲ್ಲಾ ಕಾಲಕ್ಕೂ ಹಿಂದುಗಳೇ ಮಂಡಳಿಯ ಅಧ್ಯಕ್ಷರಾಗಿರಬೇಕು ಎಂದಲ್ಲವಲ್ಲ?

ಡಿಎಸ್‌ಎನ್‌ ಪ್ರಕಾರ ಲೆ.ಜ. ಸಿನ್ಹಾ ಇನ್ನೂ ಒಂದು ’ಕೋಮು’ ಅಂಶವನ್ನು ಸೇರಿಸಿದರು. ಅದರ ಪ್ರಕಾರ, ದೇವಸ್ಥಾನದ ಬಳಕೆಗೆಂದು ತಾತ್ಕಾಲಿಕವಾಗಿ ನೀಡಿದ್ದ ೪೦ ಹೆಕ್ಟೇರ್‌ ಅರಣ್ಯ ಭೂಮಿಯನ್ನು ಶಾಶ್ವತವಾಗಿ ಮಂಡಳಿಗೆ ವರ್ಗಾಯಿಸಲು ಶಿಫಾರಸು ಮಾಡಿದ್ದು.

ಈ ಅಂಶದಲ್ಲಿ ನಾಗಭೂಷಣ ಅವರಿಗೆ ಕಂಡ ಮಹಾಪರಾಧವೇನೋ! ಎಲ್ಲಿಯವರೆಗೆ ಅಮರನಾಥ ಲಿಂಗ ಇರುತ್ತದೋ, ಅಲ್ಲಿಯವರೆಗೆ ಹಿಂದುಗಳು ಅಲ್ಲಿಗೆ ಯಾತ್ರೆ ಹೋಗುವವರೇ. ಹೀಗಿರುವಾಗ ದೇವಸ್ಥಾನ ಭೂಮಿಯನ್ನು ಮಂಡಳಿಗೆ ವರ್ಗಾಯಿಸಿದರೆ ಅದರಲ್ಲಿ ತಪ್ಪೇನಿದೆ? ಈಗ ಕಾಶ್ಮೀರದ ತುಂಬ ಭಾರತೀಯ ಸೇನಾ ನೆಲೆಗಳಿಲ್ಲವೆ? ಅವುಗಳ ಸ್ಥಾಪನೆಗೆ ಭೂಮಿ ಸಿಕ್ಕಿಲ್ಲವೆ? ಪ್ರವಾಸಿ ತಾಣಗಳಿಗೆ ಭೂಮಿ ನೀಡಿಲ್ಲವೆ? ರೈಲು, ವಿದ್ಯುತ್‌, ಬಸ್‌ ನಿಲ್ದಾಣ, ಆಸ್ಪತ್ರೆಗಳು, ಮಸೀದಿಗಳಿಗೆ ಭೂಮಿ ನೀಡಿಲ್ಲವೆ? ಇವಕ್ಕೆ ಏಳದ ಆಕ್ಷೇಪಣೆ ಅದೆಲ್ಲೋ ಎತ್ತರದ ಪರ್ವತದ ತಪ್ಪಲಿನಲ್ಲಿ ಹುದುಗಿರುವ ಪ್ರದೇಶದ ಸುತ್ತಮುತ್ತಲಿನ ಕಾಡುಭೂಮಿ ನೀಡಿದಾಗ ಏಕೆ ಉದ್ಭವವಾಗುತ್ತದೆ?

ಏಕೆಂದರೆ, ಇತರ ಧರ್ಮಗಳು ಬೆಳೆಯುವುದು ಮುಸ್ಲಿಮರಿಗೆ ಇಷ್ಟವಿಲ್ಲ. ಹೀಗಾಗಿ ೧೯೪೮ರಲ್ಲಿ ಮಾಡಿಕೊಂಡ ಒಪ್ಪಂದಕ್ಕೆ ಅವರು ಅಷ್ಟು ಬಿಗಿಯಾಗಿ ಅಂಟಿಕೊಂಡಿರುವುದು. ನಮ್ಮ ಸಂವಿಧಾನಕ್ಕೇ ಆ ಪರಿಯ ತಿದ್ದುಪಡಿಗಳಾಗಿವೆ. ಹೀಗಿರುವಾಗ, ಧಾರ್ಮಿಕ ಯಾತ್ರೆಗೆ ಸಂಬಂಧಿಸಿದಂತೆ ಒಂದು ಸಣ್ಣ ತಿದ್ದುಪಡಿಯಾದರೆ ಅದರಲ್ಲಿ ತಪ್ಪೇನಿದೆ?

೧೯೪೮ರ ಒಪ್ಪಂದದ ಅನಿವಾರ್ಯತೆ ಏನಿತ್ತು ಎಂಬುದು ’ಬುದ್ಧಿಜೀವಿ’ಯಾಗಿರುವ ನಾಗಭೂಷಣ ಅವರೇ ನಿಮಗೆ ಗೊತ್ತಿಲ್ಲವೆ? ಸ್ವಾತಂತ್ರ ಬಂದ ಅರವತ್ತೊಂದು ವರ್ಷಗಳ ನಂತರವೂ ಕಾಶ್ಮೀರವನ್ನು ಒಂದು ಸ್ವಾಯತ್ತ ಸ್ಥಿತಿಯಲ್ಲಿ ಇರಿಸುವ ಅಪಾಯ ನಿಮಗೆ ತಿಳಿಯುತ್ತಿಲ್ಲವೆ? ಅದೆಂಥ ಕೋಮುವಾದ ನಿಮ್ಮನ್ನು ಆವರಿಸಿರಬಹುದು!

ಅಷ್ಟಕ್ಕೂ ಇಲ್ಲಿ ಪ್ರಸ್ತಾಪವಾಗಿರುವುದು ದೇವಸ್ಥಾನ ಆಡಳಿತ ಮಂಡಳಿಗೆ ಜಮೀನು ನೀಡುವ ವಿಷಯ. ಅದೂ ಕೇವಲ ಶಿಫಾರಸು ಮಾತ್ರ. ಲೆ.ಜ. ಸಿನ್ಹಾ ಸೂಚಿಸಿದ್ದು ೪೦ ಹೆಕ್ಟೇರ್‌ ಅರಣ್ಯ ಭೂಮಿಯ ಹಸ್ತಾಂತರ. ಅದನ್ನು ಹಸ್ತಾಂತರಿಸಲಾಗದು ಎಂದು ಹೇಳಿದ್ದರೆ ಪರವಾಗಿದ್ದಿಲ್ಲ. ಅಥವಾ ಲೀಸ್‌ (ಗುತ್ತಿಗೆ) ನೀಡಿದ್ದರೂ ಸಾಕಿತ್ತು.

ತಮ್ಮ ಗಮನಕ್ಕೆಂದು ೨೦೦೦ನೇ ಇಸ್ವಿಯಲ್ಲಿ ಜಾರಿಗೆ ಬಂದ ’ದಿ ಜಮ್ಮು ಅಂಡ್‌ ಕಾಶ್ಮೀರ್‌ ಶ್ರೀ ಅಮರನಾಥಜಿ ಶ್ರೈನ್‌ ಆಕ್ಟ್‌ ೨೦೦೦’ನಲ್ಲಿರುವ ಕೆಲವು ಅಂಶಗಳನ್ನು ಕೊಡುತ್ತಿದ್ದೇನೆ. ನೆನಪಿರಲಿ, ಈ ಕಾಯಿದೆ ಜಾರಿಗೆ ಬಂದಿದ್ದು ಎಂಟು ವರ್ಷಗಳ ಹಿಂದೆ.

ಅದರ ಪ್ರಕಾರ: There is an Act of the Jammu & Kashmir legislature, called ‘The Jammu and Kashmir Shri Amarnathji Shrine Act, 2000’. This Act which provides for the constitution of the Shrine Board, also defines the duties of the Board. Section 16 of the Act reads as under:
16. Duties of the Board
Subject to the provisions of this Act and of any bye-laws made thereunder, it shall be the duty of the Board :-
(a) to arrange for the proper performance of worship at the Holy Shrine;
(b) to provide facilities for the proper performance of worship by the pilgrims;

(c) To make arrangements for the safe custody of the funds, valuables and jewellery and for the preservation of the Board Fund;
(d) To undertake developmental activities concern the area of the Shrine and its surroundings;
(e) To make provision for the payment of suitable emoluments to the salaried staff;
(f) To make suitable arrangements for the imparting of religious instructions and general education to the pilgrims;
(g) To undertake, for the benefit of worshippers and pilgrims:
(i) the construction of buildings for their accommodation;
(ii) the construction of sanitary works;

(iii) the improvement of means of communication.
(h) To make provision of medical relief for worshippers and pilgrims;
(i) to do all such things as may be incidental and conducive to the efficient management, maintenance and administration of the Holy Shrine and the Board Funds and for the convenience of the pilgrims.

ಇದರಲ್ಲಿ ಪ್ರಸ್ತಾಪಿತಗೊಂಡ ಡಿ, ಎಫ್‌ ಮತ್ತು ಜಿ ಅಂಶಗಳನ್ನು ಪರಿಶೀಲಿಸಿ. ಲಕ್ಷಾಂತರ ಜನರು ಪಾಲ್ಗೊಳ್ಳುವ ಯಾತ್ರೆಯಲ್ಲಿ, ಅದೂ ದುರ್ಗಮ ಪ್ರದೇಶದ ಹಾಗೂ ಭಯೋತ್ಪಾದನೆ ಭೀತಿ ಇರುವ ಪ್ರದೇಶದಲ್ಲಿ ಕನಿಷ್ಟ ಸೌಲಭ್ಯಗಳಾದರೂ ಇರಬೇಕಲ್ಲವೆ? ಅದಕ್ಕೆ ಬೇಕಾದಂತೆ ಭೂಮಿಯನ್ನು ನೀಡುವುದು ಆ ರಾಜ್ಯದ ಅಥವಾ ಒಟ್ಟಾರೆ ಸರ್ಕಾರದ ಕರ್ತವ್ಯ ಅಲ್ಲವೆ? ನಿಯಮದ ಪ್ರಕಾರ, ಇದನ್ನೆಲ್ಲಾ ನೋಡಿಕೊಳ್ಳುವ ಜವಾಬ್ದಾರಿ ಅಮರನಾಥ ಮಂಡಳಿಯದು. ಸರ್ಕಾರ ಮಂಡಳಿಯ ತೀರ್ಮಾನಕ್ಕೆ ಗೌರವ ಕೊಡಬೇಕಾಗುತ್ತದೆ. ಏಕೆಂದರೆ, ಅದು ಕಾನೂನುಬದ್ಧವಾಗಿ ರಚನೆಯಾದ ಮಂಡಳಿ.

ಎಂಟು ವರ್ಷಗಳ ಹಿಂದೆಯೇ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಆಗ ಎತ್ತದ ಆಕ್ಷೇಪಣೆಗಳು ಈಗೇಕೆ ಕಾಣಿಸಿಕೊಂಡವು? ಪ್ರತಿಯೊಂದು ಬೆಳವಣಿಗೆಯನ್ನೂ ಕೋಮುಕಣ್ಣಲ್ಲೇ ನೋಡುವ ಕಾಶ್ಮೀರಿ ಮುಸ್ಲಿಮರು ಆಗೇಕೆ ಸುಮ್ಮನಿದ್ದರು?

ಡಿಎಸ್‌ಎನ್‌ ಅವರೇ, ಭಾರತದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಸರ್ಕಾರ ನೇರವಾಗಿ ನಡೆಸುವುದಿಲ್ಲ. ಅದಕ್ಕಾಗಿ ಸಮಿತಿಗಳು ಹಾಗೂ ಮಂಡಳಿಗಳು ರಚನೆಯಾಗಿರುತ್ತವೆ. ತಂತಮ್ಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ಕಾನೂನುಬದ್ಧ ಹಕ್ಕು ಅವಕ್ಕಿರುತ್ತದೆ. ಸಂವಿಧಾನದ ಕಲಂ ೨೬ ಮತ್ತು ೨೭ ಕೂಡ ಇದೇ ಅಂಶವನ್ನು ಸ್ಪಷ್ಟಪಡಿಸುತ್ತವೆ.

Article 26ರ ಪ್ರಕಾರ:
Freedom to manage religious affairs:
Subject to public order, morality and health, every religious denomination or any section thereof shall have the right—
(a) to establish and maintain institutions for religious and charitable purposes;
(b) to manage its own affairs in matters of religion;
(c) to own and acquire movable and immovable property; and
(d) to administer such property in accordance with law.

ತನ್ನ ಧಾರ್ಮಿಕ ಚಟುವಟಿಕೆಗಳನ್ನು ನಡೆಸುವ ಹಕ್ಕು ಪ್ರತಿಯೊಂದು ಧರ್ಮಕ್ಕೂ ಇದೆ. ಅದರ ಸಲುವಾಗಿ, ತನ್ನದೇ ಆದ ಧಾರ್ಮಿಕ ಸಂಸ್ಥೆಗಳನ್ನು ಅಥವಾ ದತ್ತಿ ಸಂಸ್ಥೆಗಳನ್ನು ಹುಟ್ಟು ಹಾಕಬಹುದು, ಚರ ಮತ್ತು ಸ್ಥಿರ ಆಸ್ತಿ ಹೊಂದಬಹುದು ಹಾಗೂ ಕಾನೂನುಬದ್ಧವಾಗಿ ಈ ಆಸ್ತಿಗಳ ನಿರ್ವಹಣೆ ಮಾಡಬಹುದು. ಈಗ ಅಮರನಾಥ ಮಂಡಳಿ ಮಾಡುತ್ತಿರುವುದೂ ಇದನ್ನೇ. ಸಂವಿಧಾನಬದ್ಧವಾಗಿಯೇ ಇರುವ ಈ ಚಟುವಟಿಕೆಯಲ್ಲಿ ತಾವು ಹೇಗೆ ಕೋಮುವಾದವನ್ನು ಹೆಕ್ಕಿದಿರೋ!

ಸಂವಿಧಾನದ ಕಲಂ ೨೭ ಕೂಡ ಇದನ್ನೇ ಹೇಳುತ್ತದೆ.
Freedom as to payment of taxes for promotion of any particular religion.
No person shall be compelled to pay any taxes, the proceeds of which are specifically appropriated in payment of expenses for the promotion or maintenance of any particular religious denomination.
All faiths deserve equal respect. And the State should not discriminate between followers of different faiths. This is the meaning of Indian secularism. It enjoins on us to create proper amenities, with necessary infrastructure, at the pilgrimage centres of all communities. There can be no double standards in this matter.

ಆ ಪ್ರಕಾರ, ಧರ್ಮಗಳ ನಡುವೆ ಭೇದ ಎಣಿಸಬಾರದು. ಅದು ಭಾರತೀಯ ಜಾತ್ಯತೀತ ಧೋರಣೆಯ ಮುಖ್ಯ ಆಶಯ. ಹಜ್‌ ಯಾತ್ರೆ ನಡೆಯುತ್ತಿರುವುದೇ ಇಂತಹ ಆಶಯದ ಹಿನ್ನೆಲೆಯಲ್ಲಿ. (ಈಗ ಬಿಡಿ, ಅದಕ್ಕೂ ರಾಜಕೀಯ ಲೇಪ ಬಂದುಬಿಟ್ಟಿದೆ. ಹಜ್‌ ಯಾತ್ರೆ ಸಂಘಟಿಸಲು ತೋರುವಷ್ಟು ಉತ್ಸಾಹ ಹಾಗೂ ಕಾಳಜಿಯನ್ನು ಇತರ ಪ್ರಮುಖ ಧರ್ಮಗಳ ಆಚರಣೆಗಳಿಗೆ ನಮ್ಮ ಸರ್ಕಾರ ತೋರುತ್ತಿಲ್ಲ!) ಅಂಥದೇ ಆಶಯ ಅಮರನಾಥ ಯಾತ್ರೆಯಲ್ಲಿಯೂ ಇರಬೇಕು. ಒಂದು ವೇಳೆ ಇಲ್ಲದಿದ್ದರೆ, ಇರುವಂತೆ ನೋಡಿಕೊಳ್ಳಬೇಕು. ಅಷ್ಟಕ್ಕೂ ಹಿಂದುಗಳು ಹೋಗುತ್ತಿರುವುದು ವಿದೇಶಕ್ಕೇನೂ ಅಲ್ಲವಲ್ಲ? ತಮ್ಮದೇ ದೇಶದ ಒಂದು ಭಾಗಕ್ಕೆ ತಾನೆ? ಅಲ್ಲಿ ಕನಿಷ್ಠ ಸೌಲಭ್ಯಗಳನ್ನು ನೀಡದಿದ್ದರೆ ಹೇಗೆ? ನೀಡಲು ಮುಂದಾದರೆ, ಅದಕ್ಕೂ ಸಲ್ಲದ ಕಾರಣಗಳನ್ನು ಮುಂದೊಡ್ಡಿ ಅಡ್ಡಿಪಡಿಸಿದರೆ ಹೇಗೆ? ಇಂತಹ ಸಣ್ಣತನವನ್ನು ಪ್ರತಿಭಟಿಸಿದರೆ ಅದ್ಹೇಗೆ ತಪ್ಪಾಗುತ್ತದೆ?

ಅಮರನಾಥ ಲಿಂಗ ಇರುವ ಗುಹೆಗೆ ನೈಸರ್ಗಿಕ ಸವಾಲುಗಳನ್ನು ಎದುರಿಸಿಯೇ ಹೋಗಬೇಕು. ಈಗಿರುವ ಸೌಲಭ್ಯಗಳನ್ನು ನೋಡಿದರೆ, ಅತ್ಯಂತ ಶಕ್ತ ಯುವಕ-ಯುವತಿಯರು ಮಾತ್ರ ಯಾತ್ರೆ ಕೈಗೊಳ್ಳಬಹುದು. ಹೀಗಿರುವಾಗ, ಧಾರ್ಮಿಕ ಶ್ರದ್ಧೆಯ ಇತರ ವಯೋಮಾನದ ಜನ ಏನು ಮಾಡಬೇಕು? ಮಂಡಳಿ ರಚನೆಯಾಗಿ ಎಂಟು ವರ್ಷಗಳಾದ ನಂತರವೂ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸದಿದ್ದರೆ ಹೇಗೆ? ನಿಮಗೆ ಇಂತಹ ವಿಷಯಗಳು ಏಕೆ ಹೊಳೆಯುತ್ತಿಲ್ಲ ಡಿ.ಎಸ್‌. ನಾಗಭೂಷಣ ಅವರೇ?

ಕಾಶ್ಮೀರಕ್ಕೆ ಪ್ರವಾಸಿಗಳು ಬರಲು ಎಲ್ಲ ವ್ಯವಸ್ಥೆ ಕಲ್ಪಿಸುತ್ತೀರಿ. ಅದಕ್ಕೇನೂ ವಿರೋಧವಿಲ್ಲ. ಆದರೆ, ಧಾರ್ಮಿಕ ಕ್ಷೇತ್ರಕ್ಕೆ ಅದನ್ನು ನಿರಾಕರಿಸುತ್ತಿರುವುದು ಏಕೆ?

ಏಕೆಂದರೆ, ಪ್ರವಾಸೋದ್ಯಮದಿಂದ ಹಣ ಬರುವುದು ಕಾಶ್ಮೀರಿ ಮುಸ್ಲಿಮರಿಗೆ. ಹೀಗಾಗಿ, ಅದಕ್ಕೆ ವಿರೋಧವಿಲ್ಲ. ಅಮರನಾಥ ಯಾತ್ರೆಯಿಂದಲೂ ಕಾಶ್ಮೀರಿ ಮುಸ್ಲಿಮರಿಗೆ ಆರ್ಥಿಕ ಲಾಭವಿದೆ. ಆದರೆ, ಇಲ್ಲಿ ಧಾರ್ಮಿಕ ಅಂಶವಿರುವುದರಿಂದ ಅವರು ಒಪ್ಪುತ್ತಿಲ್ಲ. ನಾಳೆ ಎಲ್ಲಾ ಹಿಂದುಗಳು ಬಂದು ಅಮರನಾಥ ಮಾರ್ಗದುದ್ದಕ್ಕು ನೆಲೆಸಿದರೆ ಹೇಗೆ ಎಂಬ ಆತಂಕ ಅವರನ್ನು ಕಾಡುತ್ತಿರಬೇಕು.

ಹಾಗಾದರೆ ಇದು ಜಾತ್ಯತೀತ ಧೋರಣೆಯಾ ಡಿಎಸ್‌ಎನ್‌.?

ನಮ್ಮ ಧರ್ಮ ಬೆಳೆಯಲಿ, ಆದರೆ, ಇತರರ ಧರ್ಮ ಬೆಳೆಯುವುದು ಬೇಡ ಎಂಬುದು ಅದ್ಹೇಗೆ ಜಾತ್ಯತೀತ ಧೋರಣೆಯಾಗುತ್ತದೆ? ಮುಸ್ಲಿಮರು ಪ್ರತಿಭಟಿಸುತ್ತಿರುವುದು ಈ ಕಾರಣಕ್ಕೆ ಅಲ್ಲವೆ? ಹೀಗಿದ್ದರೂ ಇದರಲ್ಲಿ ನಿಮಗೆ ರಾಜಕೀಯ ವಾಸನೆ ಬಡಿಯುತ್ತದೆ. ಕೋಮುವಾದದ ವಾಸನೆ ತಾಕುತ್ತದೆ. ಆದರೆ, ಈ ವಾಸನೆ ಕೇವಲ ಹಿಂದುಗಳದ್ದು ಮಾತ್ರ ಎಂಬುದು ನಿಮ್ಮ ವೈಚಾರಿಕ ಸಣ್ಣತನಕ್ಕೆ ಸಾಕ್ಷಿ. ಮುಸ್ಲಿಮರಿಂದಲೂ ಇಂಥದೇ ವಾಸನೆ ಬರುತ್ತಿರುವುದು ತಮ್ಮ ಬುದ್ಧಿಜೀವಿ ನಾಸಿಕಕ್ಕೆ ಏಕೆ ಗೊತ್ತಾಗಲಿಲ್ಲವೋ!

ಎಲ್ಲಕ್ಕೂ ಮುಖ್ಯ ಎಂದರೆ, ೧೭-೫-೨೦೦೫ರಂದು ಹೈಕೋರ್ಟ್‌‌ನ ವಿಭಾಗೀಯ ಪೀಠ ಅಮರನಾಥ ಮಂಡಳಿ ಪುನರ್‌ರಚನೆ ಕುರಿತಾದ ಎಲ್ಲ ಆಕ್ಷೇಪಣೆಗಳನ್ನೂ ತಳ್ಳಿಹಾಕಿ, ಯಾತ್ರೆ ಸುಗಮವಾಗಿ ನಡೆಯಲು ಬೇಕಾದ ಮಾನದಂಡಗಳನ್ನು ರೂಪಿಸಿದೆ. ತನ್ನ ತೀರ್ಪಿನಲ್ಲಿ ಹೈಕೋರ್ಟ್‌ “The land to be allotted by the Board would be only for the purposes of its user and would remain allotted for the duration of the yatra. The board shall also identify the sites to be allotted for the purposes of ‘Langar’, erection of detachable pre-fabricated huts and toilets etc. which would not be permanent in nature and which are liable to be removed after the yatra is over. The Board shall identify the person/agency to whom the site would be allotted so as to enable the State Government to screen the activities of such person/agency……” ಎಂದು ಸ್ಪಷ್ಟಪಡಿಸಿದೆ.

ಹೀಗಿದ್ದರೂ ಮುಸ್ಲಿಮರು ಭಯಪಡುತ್ತಿರುವುದೇಕೆ? ಜಾತ್ಯತೀತ ವಕ್ತಾರರಾದ ನಿಮ್ಮಲ್ಲಿ ಏನಂಥ ಭಯ ಹುಟ್ಟಿಕೊಂಡಿರುವುದು? ತಮ್ಮ ಧಾರ್ಮಿಕ ಕ್ಷೇತ್ರಕ್ಕೆ ಹೋಗಲು ತಾತ್ಕಾಲಿಕ ಸೌಲಭ್ಯಗಳನ್ನು ಕಲ್ಪಿಸಲೂ ಬಿಡುತ್ತಿಲ್ಲ ಎಂದ ಮೇಲೆ ಕಾಶ್ಮೀರಿ ಮುಸ್ಲಿಮರ ಬಗ್ಗೆ ದೇಶದ ಇತರ ಬಹುಸಂಖ್ಯಾತ ಜನರಲ್ಲಿ ಅದೆಂಥ ಪ್ರೀತಿ ಹುಟ್ಟೀತು? ನಾಳೆ ಇದೇ ಧೋರಣೆಯನ್ನು ಮುಸ್ಲಿಮರಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ತೋರಿದರೆ ಹೇಗೆ? ಅದನ್ನು ವಿರೋಧಿಸುವ ನೈತಿಕತೆ ಯಾರಿಗಿದ್ದೀತು?

ನಿಮ್ಮನ್ನು ಬಿಡಿ, ನೀವು ಪ್ರತಿಯೊಂದನ್ನೂ ಕೋಮು ಕನ್ನಡಕ ಹಾಕಿಕೊಂಡೇ ನೋಡುತ್ತೀರಿ, ಬರೆಯುತ್ತೀರಿ. ನಿಮಗೆ ಇಂತಹ ಪ್ರಶ್ನೆಗಳು ಕಾಡುವುದಿಲ್ಲ. ಒಂದು ವೇಳೆ ಇತರರು ಅವನ್ನು ಕೇಳಿದರೂ ನೀವು ಉತ್ತರಿಸುವುದಿಲ್ಲ. ಏಕೆಂದರೆ, ನಿಮಗೆ ಅಂತಹ ಸಾಮಾಜಿಕ ಜವಾಬ್ದಾರಿಯೇ ಇಲ್ಲ. ಈ ಸಾಲನ್ನು ನಾನು ತುಂಬ ಯೋಚಿಸಿ ಬರೆಯುತ್ತಿದ್ದೇನೆ. ಕೇವಲ ಉಗ್ರವಾದಿಗಳಷ್ಟೇ ಅಲ್ಲ ಸಮಾಜದ ಸ್ವಾಸ್ಥ್ಯ ಕೆಡಿಸುವವರು. ನಿಮ್ಮಂಥ ತಪ್ಪು ಧೋರಣೆಯ ವ್ಯಕ್ತಿಗಳೂ ಅವರಲ್ಲಿ ಸೇರುತ್ತೀರಿ. ಏಕಪಕ್ಷೀಯ ವಿಚಾರಧಾರೆ ಹರಡಲು ಯತ್ನಿಸುತ್ತ, ಆ ಮೂಲಕ ಪ್ರಚಾರ ಪಡೆಯುತ್ತ, ಅದನ್ನೇ ಮನ್ನಣೆ ಎಂದು ಭಾವಿಸಿಕೊಂಡು ಇನ್ನಷ್ಟು ಅಪಾಯಕಾರಿಗಳಾಗುತ್ತೀರಿ.

ಸತ್ಯವನ್ನು ಒಪ್ಪಿಕೊಳ್ಳದ ನಿಮ್ಮಂಥವರಿಗೆ ಧಿಕ್ಕಾರವಿರಲಿ.

- ಚಾಮರಾಜ ಸವಡಿ

No comments: